ಮೆಲುಕು - ೪
೩೧. ಆಸೆ
ಯಾರಿಗೆ ಇರೋದಿಲ್ಲ ತಾನೇ ಆಸೆ
ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ
ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ
ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ
***
೩೨. ದೇವಸ್ಥಾನ
ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ
ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ
ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ
ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ
***
೩೩. ಬ್ರಿಲಿಯಂಟ್ಸ್ಗಳು
ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು
ಇವರ ಮುಂದೆ ನಾವು ಯಾವಾಗಲೂ ಕುಂಟರು
ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು
ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು.
***
೩೪. ರೈತ
ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ
ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ
ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ
ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ
***
೩೫. ಯಶಸ್ಸು
ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು
ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು
ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು
ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು
***
೩೬. ಗಿರವಿ ಅಂಗಡಿ ಗೀರ
ಗಿರವಿ ಅಂಗಡಿ ಗೀರ
ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ
ಒಂದ್ ಕಿಟ ಅವರೋದ್ರೇ ಬಾನೆತ್ತರ
ಅವರಿಂದ ನೀನಾಗುವೆ ಸಂಹಾರ
***
೩೭. ವಿದ್ಯೆ
ವಿದ್ಯಾದಾನವೇ ಮಹಾದಾನ ಅಂದಾಗಿತ್ತು
ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ
ಆದರೆ ಇದನ್ನು ಮಾತ್ರ ಮರೆಯಬೇಡಿ
ದುಡ್ಡೇ ದೊಡಪ್ಪ ವಿದ್ಯೆ ಅವರಪ್ಪ
***
೩೮. ಕೊಡಗಿನ ಹಸಿರು
ಪ್ರಕೃತಿಯ ಪ್ರಯೋಗಾಲಯ ಕೊಡಗು
ಮೂಡಿಸಿದೆ ಎಲ್ಲೆಲೂ ಹಸಿರಿನ ಬೆರಗು
ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು
ಹೋಗಲಾಡಿಸುವುದು ಮನದ ಕೊರಗು
***
೩೯. ಕುಂಕುಮ
ಹಣೆಯಲಿ ಯಾವಾಗಲೂ ನಗುತ್ತಿರಬೇಕು ಕುಂಕುಮ
ನೋಡಿದವರ ಮನಸ್ಸಿಗೆ ಸಿಗುವುದು ಸಂಭ್ರಮ
ಈಗ ಹಣೆಯಲ್ಲಿ ಕುಂಕುಮ ಇಡುವುದಕ್ಕೆ ಬರ
ಇಡದಿದ್ದವರಿಗೆ ಆ ದಿನ ತಪ್ಪಿದಲ್ಲ ಗ್ರಹಚಾರ
***
೪೦. ಸಂಸ್ಕೃತ ಭಾರತಿ
ದೇವ ಭಾಷೆಗೆ ತವರೂರಿದು ಸಂಸ್ಕೃತ ಭಾರತಿ
ಮಾಡುವೆನು ನಿನಗೆ ಜೇoಕಾರದ ಆರತಿ
ಅದೆಲ್ಲಿ ಹುಟ್ಟಿತು ಆ ನಿನ್ನ ಸಂತತಿ
ಮೈನವಿರೇಳುತ್ತದೆ ನೋಡಿ ಆ ನಿನ್ನ ಪ್ರಗತಿ
***
Comments
Post a Comment