ಮೆಲುಕು - ೪

 ೩೧. ಆಸೆ

ಯಾರಿಗೆ ಇರೋದಿಲ್ಲ ತಾನೇ ಆಸೆ

ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ

ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ

ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ


***


೩೨. ದೇವಸ್ಥಾನ

ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ

ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ

ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ

ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ


***


೩೩. ಬ್ರಿಲಿಯಂಟ್ಸ್ಗಳು

ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು

ಇವರ ಮುಂದೆ ನಾವು ಯಾವಾಗಲೂ ಕುಂಟರು

ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು

ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು.


***


೩೪. ರೈತ

ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ

ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ

ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ

ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ


***


೩೫. ಯಶಸ್ಸು

ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು

ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು

ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು

ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು


***


೩೬. ಗಿರವಿ ಅಂಗಡಿ ಗೀರ

ಗಿರವಿ ಅಂಗಡಿ ಗೀರ

ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ

ಒಂದ್ ಕಿಟ ಅವರೋದ್ರೇ ಬಾನೆತ್ತರ

ಅವರಿಂದ ನೀನಾಗುವೆ ಸಂಹಾರ


***


೩೭. ವಿದ್ಯೆ

ವಿದ್ಯಾದಾನವೇ ಮಹಾದಾನ ಅಂದಾಗಿತ್ತು

ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ

ಆದರೆ ಇದನ್ನು ಮಾತ್ರ ಮರೆಯಬೇಡಿ

ದುಡ್ಡೇ ದೊಡಪ್ಪ ವಿದ್ಯೆ ಅವರಪ್ಪ


***


೩೮. ಕೊಡಗಿನ ಹಸಿರು

ಪ್ರಕೃತಿಯ ಪ್ರಯೋಗಾಲಯ ಕೊಡಗು

ಮೂಡಿಸಿದೆ ಎಲ್ಲೆಲೂ ಹಸಿರಿನ ಬೆರಗು

ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು

ಹೋಗಲಾಡಿಸುವುದು ಮನದ ಕೊರಗು


***


೩೯. ಕುಂಕುಮ

ಹಣೆಯಲಿ ಯಾವಾಗಲೂ ನಗುತ್ತಿರಬೇಕು ಕುಂಕುಮ

ನೋಡಿದವರ ಮನಸ್ಸಿಗೆ ಸಿಗುವುದು ಸಂಭ್ರಮ

ಈಗ ಹಣೆಯಲ್ಲಿ ಕುಂಕುಮ ಇಡುವುದಕ್ಕೆ ಬರ

ಇಡದಿದ್ದವರಿಗೆ ಆ ದಿನ ತಪ್ಪಿದಲ್ಲ ಗ್ರಹಚಾರ


***


೪೦. ಸಂಸ್ಕೃತ ಭಾರತಿ 

ದೇವ ಭಾಷೆಗೆ ತವರೂರಿದು ಸಂಸ್ಕೃತ ಭಾರತಿ

ಮಾಡುವೆನು ನಿನಗೆ ಜೇoಕಾರದ ಆರತಿ

ಅದೆಲ್ಲಿ ಹುಟ್ಟಿತು ಆ ನಿನ್ನ ಸಂತತಿ

ಮೈನವಿರೇಳುತ್ತದೆ ನೋಡಿ ಆ ನಿನ್ನ ಪ್ರಗತಿ


***

Comments

Popular posts from this blog

Ageing is not an end

Thank You

My Mother