ಪದ್ಯಗಳು - ೩
ನನ್ನವಳು
ಬುಲೆಟ್ ಕೆಟಿಮ್ ಗಾಡಿ ಬೇಕು ಎನ್ನಲಿಲ್ಲ ನನ್ನವಳು,
ರೆಂಟಲ್ ಗಾಡಿಲಿ ಚಾಮುಂಡಿ ಬೆಟ್ಟ ತೋರಿಸು ಅಂದಳು.
ಅಂದು ಚೆಂದ ನೋಡಿ ನನ್ನನ್ನು ಪ್ರೀತಿಸಲಿಲ್ಲ ನನ್ನವಳು
ಕಪ್ಪು ಬಿಳುಪು ಲೆಕ್ಕಿಸದೆ ಮನಸ್ಸು ನೋಡಿ ಪ್ರೀತಿಸಿದಳು
ದೊಡ್ಡ ಆಸೆಗಳನ್ನು ನನಸು ಮಾಡು ಅಂತ ಹೇಳಲಿಲ್ಲ ನನ್ನವಳು,
ಪುಟ್ಟ ಆಸೆಗಳನ್ನೆ ಈಡೇರಿಸುವಾಗ ಅನುಭವಿಸುತ್ತಾ ಖುಷಿ ಪಟ್ಟಳು.
ಕೆಲಸ ಹೋದಾಗ ನೀನೊಬ್ಬ ನಿರುದ್ಯೋಗಿ ಅಂತ ಹೇಳಲಿಲ್ಲ ನನ್ನವಳು,
ಆಕೆಯ ಹಣ ಕೊಟ್ಟು ನನ್ನನ್ನು ರಾಜನಂತೆ ನೋಡಿಕೊಂಡಳು.
ಎಲ್ಲರನ್ನೂ ಕಳೆದು ಕೊಂಡಾಗ ಕೈ ಬಿಡಲಿಲ್ಲ ನನ್ನವಳು,
ನಿನ್ನ ಜೊತೆಗೆ ಸದಾ ನಾನಿರುವೆ ದೃಢವಾಗಿ ಹೇಳಿದಳು.
***
ಬೆಳಕಿನ ಸಂಕೇತ ದೀಪಾವಳಿ
ನೆಲೆಸಲಿ ಸುಖ ಶಾಂತಿ ನಿಮ್ಮೆಲ್ಲರ ಮನಸಲಿ
***
***
ಚೈತ್ರ ಚಿಗುರಿತು ಶಿಶಿರ ಕಳೆದಿತು,
ಇದೋ ಬಂತು ಯುಗಾದಿ.
ಹೊಸ ತನವ ತರುತ
ಹೊಸ ವಿಷಯವ ಸಾರುತ,
ಮಾಡಿತು ಹಳೆ ನೆನಪುಗಳ ಬೂದಿ.
ಹರುಷ ಸಂತೋಷದ ಸಂಕೇತ
ಈ ಬೇವು ಬೆಲ್ಲ.
ಸಂತಸ ಖುಷಿ ತರಲಿ ಈ
ಯುಗಾದಿ ನಿಮಗೆಲ್ಲ.
ಶುರುವಾಯ್ತು ಈ ಯುಗದಲ್ಲಿ
ವಿಳಂಬಿ ಸಂವತ್ಸರ.
ಸೂಸಲಿ ನಿಮಗೆ ಜೀವನದಲ್ಲಿ
ಸುಖ ಶಾಂತಿಯ ಮಾಮರ.
ಪಸರಿಸಿತು ವಸಂತದಲ್ಲಿ
ಮಾವಿನ ಘಮ.
ಅರಳಿತು ಹೊಲಗದ್ದೆಗಳಲ್ಲಿ
ಹೂವಿನ ಸಂಭ್ರಮ.
ಕೋಗಿಲೆ ಹಾಡುವುದು
ಕೇಳುವುದಕ್ಕೆ ಚಂದ.
ಇದೋ ವಸಂತ ತಂದ
ಕೋಗಿಲೆ ಗಾನದ ಚಂದ.
ಯುಗಗಳ ಹಾದಿ ಯುಗಾದಿ
ಈ ಸಂವತ್ಸರದಲ್ಲಿ ಕಾಣು ಸಂವೃದ್ದಿ.
ಯುಗಾದಿ ಬಂತು ಯುಗಾದಿ
ತಂದಿತು ಸಂತೋಷದ ಬುನಾದಿ.
***
Comments
Post a Comment