Kannada - ಮೆಲುಕು
೧. ನಮಸ್ಕಾರ
ಚುಟುಕು ಬರೆಯುವುದಕ್ಕೆ ನೀಡಿದ್ದೀರಾ ಸಹಕಾರ
ನಾನಾಡಿದ್ದೇನೆ ಪದ ವಾಕ್ಯಗಳ ನಡುವೆ ಸಂಚಾರ
ಈ ಚುಟುಕುಗಳಲ್ಲಿದೆ ಒಂದುಚೂರು ವಿಚಾರ
ನನ್ನ ಪ್ರೀತಿಯ ಚುಟುಕು ಬಾಂದವರಿಗೆಲ್ಲ ನಮಸ್ಕಾರ
***
೨. ಹಠದ ಆಟ
ಜೀವನ ಒಂದು ಆಟ
ಅದನ್ನು ಗೆಲ್ಲಲೇಬೇಕೆಂಬ ಚಟ
ಗೆದ್ದವನು ಕಲಿಯುವನು ಪಾಠ
ಗೆಲ್ಲಲಾರದವನು ಪಡುವನು ಸಂಕಟ
***
೩. ಮಲೆನಾಡು
ಮಲೆಗಳ ನಾಡು
ಮನತಣಿಸುವ ಬೀಡು
ಎಲ್ಲೆಲ್ಲೂ ಸಹ್ಯಾದ್ರಿಯ ಗೂಡು
ತೊಲಗಿಸುವುದು ಮನಸ್ಸಿನ ಕೇಡು
***
೪. ಮಳೆ
ನಮ್ಮೊರಲ್ಲಿ ಬರುತ್ತೆ ಜಡಿಮಳೆ
ಮಳೆ ಒದ್ದೆ ಮಾಡಿತು ಈ ಇಳೆ
ತೊಲಗಿಸಿತು ರೈತನ ಗೋಳಿನ ಕೊಳೆ
ಆಮೇಲೆ ಬಂತು ಬಂಗಾರದ ಬೆಳೆ
***
೫. ವೈಶಿಷ್ಟ್ಯ
ಬೊಗಸೆಯಲ್ಲಿ ಹರಳಿದ ಪ್ರೀತಿ ಚಂದ
ಗಂಧವನ್ನ ಸವಿದರೆ ಪರಮಾನಂದ
ದುಂಭಿ ಹೂವಲ್ಲಿ ಹೀರುವುದು ಮಕರಂದ
ಆದರೆ ತಾವರೆ ಕೆಸರಿನಲ್ಲಿಯೇ ಹರಳುವುದು ಚಂದ
***
೬. ಆಕೆ
ಅವಳದು ಸಂಪಿಗೆಯಂತಹ ಸ್ಮೈಲು
ಅದಕ್ಕೆ ನಾನಾದೆ ಐಲು ಪೈಲು
ಅಂದದಲ್ಲಿ ರಂಭೆಗಿಂತಲೂ ಮೇಲು
ಇವಳ ಮುಂದೆ ನಾ ಒಪ್ಪಿ ಕೊಳ್ಳಲೇಬೇಕಿತ್ತು ಸೋಲು
***
೭. ಮದುವೆ
ಸಪ್ತಾರ್ಷಿಗಳ ಆಶೀರ್ವಾದದಿಂದ
ಅಗ್ನಿಸಾಕ್ಷಿಯ ಮುಂದೆ ಸಪ್ತಪದಿ ತುಳಿದು
ಬ್ರಹ್ಮಗಂಟನು ಬಿಗಿದು ಅರುಂಧತಿ ನಕ್ಷತ್ರವನ್ನು
ನೋಡಿ ಹಿರಿಯರ ಆಶೀರ್ವಾದಿಂದಾಗುವುದೇ ಮದುವೆ
***
೮. ಸಾಹಿತ್ಯ
ಬರೆದೆ ನಾನು ಚುಟುಕು ಸಾಹಿತ್ಯ
ನೀಡಿತು ನನ್ನ ಬದುಕಿಗೆ ಲಾಲಿತ್ಯ
ಗೀಚಿದೆ ಅದನ್ನು ನಾನು ನಿತ್ಯ ನಿತ್ಯ
ಇದೆ ತಾನೆ ನನ್ನ ಬದುಕಿಗೆ ಅಗತ್ಯ
***
೯. ಬೆಳೆ
ಕಾಲ ಕಾಲಕ್ಕೆ ಆಗಬೇಕು ಬೆಳೆ
ಸಮಯಕ್ಕೆ ಸರಿಯಾಗಿ ಬೇಡವೇ ಮಳೆ?
ಬೆಳೆ ಬಾರದಿದ್ದರೆ ರೈತನ ಜೀವನ ಗೋಳೆ
ಬೆಳೆ ಬಂದರೆ ಚಿಮ್ಮುವುದು ಹರುಷದ ಹೊಳೆ
***
೧೦. ವೇಗ
ಕಡಿಮೆ ವೇಗ ವಾಹನ
ನಮ್ಮ ಜೀವನ ಪಾವನ
ಭಾರಿ ವೇಗ ವಾಹನ
ನಮ್ಮ ಫೋಟೋ ಪ್ರದರ್ಶನ
***
೧೧. ಮರ
ದೇಶಕ್ಕೆ ಶೋಭೆಯೇ ಈ ಹಸಿರು ಮರ
ಆದರೆ ನಮ್ಮ ಜನರಿಗೆ ಮರ ಬೆಳೆಸುವ ಬರ
ಬೇಡವೇ ಮರ ಬೆಳೆಸುವುದಕ್ಕೆ ಜನರ ಸಹಕಾರ
ಸಹಕಾರ ಇಲ್ಲದಿದ್ದರೆ ನೀನಾಗುವೆ ಸಂಹಾರ
***
೧೨. ಪರಿಸರ
ಪರಿಸರ ಇರುವುದು ಸುತ್ತಾ ಮುತ್ತಾ
ಕೊಡುವುದು ಗಾಳಿ ಅತ್ತಾ ಇತ್ತಾ
ಮಾಲಿನ್ಯ ಪರಿಸರದಲ್ಲಿ ಹೆಚ್ಚುತ್ತಾ ಹೆಚ್ಚುತ್ತಾ
ಆದರೆ ಮನುಷ್ಯನ ಸ್ವಾರ್ಥ ಪರಿಸರದ ಕಡೆಗೆ ನಿಲ್ಲುತ್ತಾ...?
***
೧೩. ನೋವು
ಜೀವನದಲ್ಲಿದೆ ತುಂಬಾ ನೋವು
ನೋವು ಹೋದರೆ ಬರುವುದು ನಲಿವು
ನಲಿವಿನಿಂದಲೇ ಜೀವನದ ಉಲಿವು
ಜೀವನದ ತತ್ವಗಳನ್ನು ಅರಿತುಕೊಳ್ಳಬೇಕು ಹಲವು
***
೧೪. ನಿಘಂಟು
ಎರಡು ಮನಸ್ಸು ಕೂಡಿದರೆ ಪ್ರೀತಿ
ಇಬ್ಬರ ಜಾತಕ ಒಂದಿಕೆಯಾದರೆ ತಾನೆ ಮದುವೆ?
ಹಿಂದು,ಮುಸ್ಲಿಂ,ಕ್ರೈಸ್ತ ಆಗೋದಿಲ್ಲ ಒಂದೇ
ಈಡೀ ಜಗತ್ತು ಒಂದಾಗಿದ್ದಾರೆ ಹೇಗಿರುತ್ತೆ, ಯೋಚಿಸು ಒಮ್ಮೆ...
***
೧೫. ಪ್ರಕೃತಿ
ಪ್ರಕೃತಿ ನೋಡಲು ಅದುವೇ ಅಂದ
ಅದರ ಸೊಬಗಿನಿಂದ ಸಿಗುವುದು ಪರಮಾನಂದ
ನೀ ಯಾಕೆ ಕೆಡಿಸುತ್ತೀಯಾ ಅದರ ಚೆಂದ?
ಕೆಡಿಸುವುದನ್ನು ಬಿಟ್ಟು ಸವಿ ಅದರ ಗಂಧ
***
೧೬. ಸಮಯ
ಕಾಯೋದಿಲ್ಲ ನೋಡೋದಿಲ್ಲ ಓಡುತ್ತದೆ ಸಮಯ
ಕಾಯದಿದ್ದರೆ ಮಾಡುವುದು ನಮ್ಮ ಜೀವನ ವ್ಯಯ
ಇದನ್ನು ಆದಿತುಕೊಂಡವನ ಜೀವನ ಆಗುವುದು ಸುಖಮಯ
ಅರಿತುಕೊಳ್ಳದವನ ಜೀವನ ಆಗುವುದು ನಿರ್ಣಯ
***
೧೭. ಬಾಲ್ಯ ವಿವಾಹ
ಏನೂ ಅರಿಯದ ಹುಡುಗಿಗೆ ಅರಿಶಿಣದ ಗಂಟು
ಇವಳಿಗೆ ಗೊತ್ತಾಗುವುದೇ ಸಂಸಾರದ ನಿಘಂಟು
ಆದರೂ ಸಂಸಾರ ಮಾಡುವಳೂ ಎಂಬ ಉಟ್ಟಿಕೊಳ್ಳುವ statementu
ಆಮೇಲೆ ಸಂಸಾರದಲ್ಲಿ ಆಗುವುದ developmentu
***
೧೮. ರೇಖಾಗಣಿತದ ಡೇಟಾ
ರೇಖಾಗಣಿತದಲ್ಲಿ ಮುಖ್ಯವಾಗಿ ಬರೆಯಬೇಕು ಡೇಟಾ
ಈಗಿನ ಮಕ್ಕಳಿಗೆ ಅದನ್ನು ಬರೆಯುವುದೇ ದೊಡ್ಡ ಕಾಟ
ಡೇಟಾ ಬರೆಯದಿದ್ದರೂ ಅಂಕ ಬೇಕೆಂಬ ಹಠ
ಆದರೆ ನಿಲ್ಲುತ್ತಾ ಡೇಟಾ ಬರೆಯದ ಚಟಾ...?
***
೧೯. ಜ್ಞಾನ
ದೇಶದಲ್ಲಿ ತುಂಬಿತುಳುಕಬೇಕು ಜ್ಞಾನ
ಜ್ಞಾನದಿಂದಲೇ ಬೆಳಗುವುದು ವಿಜ್ಞಾನ
ವಿಜ್ಞಾನದಿಂದಲೇ ಹರಡುತ್ತಿದೆ ಸುಜ್ಞಾನ
ನಿಲ್ಲುವುದ ಈ ನೀಚ ಅನಿಸ್ಟ ಅಜ್ಞಾನ?
***
೨೦. ಸೊಸೆ
ಮನೆಯಲ್ಲಿದ್ದರೆ ಸೊಸೆ
ಆ ಗೃಹ ಯಾವಾಗಲೂ ಶೋಭಸೆ
ಪತಿ ಆಗ ತಿರುಗಿಸುವನು ಮೀಸೆ
ಸಂತೋಷದಿಂದಿರುವುದೇ ಅತ್ತೆ ಮಾವನ ಆಸೆ
***
೨೧. ನನಗಿದು ಕನ್ಫ್ಯೂಷನ್
ಮಾರ್ಕ್ಸ್ ಇಲ್ಲದಿದ್ದರೆ ಕೊಡಲೇಬೇಕು ಡೊನೇಷನ್
ವಯಸ್ಕರಿಗೆ ಬೇಕೇ ಬೇಕಲ್ಲ ಕಾನ್ಸೆಷನ್
ರಾಜಕಾರಣಿಗಳಲ್ಲಿ ಏಕೆ ಆಗುತ್ತಿದೆ ಮ್ಯುಟೇಷನ್
ನನಗಿದು ತುಂಬಾ ಕನ್ಫ್ಯೂಷನ್ ಕನ್ಫ್ಯೂಷನ್
***
೨೨. ಹೆಂಡತಿ
ಜೀವನದ ನಡೆನುಡಿಗಳನ್ನು ಅರ್ಥಮಾಡಿಕೊಳ್ಳುತ್ತ
ಗಂಡನ ಕಷ್ಟ ನೋವುಗಳನ್ನು ಹಣ್ಣಿನಂತೆ ಸವಿಯುತ್ತ
ಬಾಳಿನ ದೀಪವನ್ನು ಕತ್ತಲಿನಿಂದ ಬೆಳಕಿಗೆ ಸ್ಪರ್ಶಿಸುತ್ತಾ
ಗಂಡನ ಜೀವನದ ಸಂಗಾತಿಯಾಗಿರುವಳೆ ಹೆಂಡತಿ
***
೨೩. ನಾನು ಭಾರತೀಯ
ನಾನು ಭಾರತೀಯ ಅನ್ನೋದಕ್ಕೆ ಆಧಾರ್ ಕಾರ್ಡು
ಬಡವ ಶ್ರೀಮಂತ ಅನ್ನೋದಕ್ಕೆ ಬಿಪಿಎಲ್, ಎಪಿಎಲ್ ಕಾರ್ಡು
ಉದ್ಯಮಿ ಅನ್ನೋದಕ್ಕೆ ಜಾಬ್ ಕಾರ್ಡು
ನಾ ಮನುಷ್ಯ ಅನ್ನೋದಕ್ಕೆ ಯಾವ ಕಾರ್ಡು ?
***
೨೪. ಪ್ರೀತಿ
ಪ್ರೀತಿಲಿ ಬಿದ್ದವನು ಹೇಳ್ಕೊತಾನೆ ಜಾಕಿ
ಪ್ರೀತಿ ಸಿಗಲಿಲ್ಲ ಅಂದರೆ ಅವನು ತಿರುಬೋಕಿ
ನೀನು ಬೇಡ ಅಂತ ಬರೆದು ಕೊಟ್ಟಳು ಸೈನ್ ಹಾಕಿ
ಇನ್ನೇನು ಉಳಿದಿದೆ ಅವನ ಜೀವನದಲ್ಲಿ ಬಾಕಿ?
***
೨೫. ಪ್ರೀತಿ ಒಂತರ ಗಿನತಿ
ಒಂದು ಎರಡು ಹುಡುಗಿ ಇಂದೇ ಹೊರಡು ಮೂರು ನಾಲ್ಕು
ಕಾಲು ಹಾಕು; ಐದು ಆರು ಪ್ರಿಯತಮನ ಹಾರ್ಟು ಶೇರು
ಏಳು ಎಂಟು ಯಾವಾಗ ನೋಡಿದರು ಮೀಟು
ಒಂಬತ್ತು ಹತ್ತು ನಿನ್ಮೇಲೇ ಪ್ಯಾರ್ ಆಯ್ತು
***
೨೬. ಅಂದು-ಇಂದು
ಅಂದಿನ ಅಮ್ಮ ಇಂದಿನ ಮಮ್ಮಿ
ಅಂದಿನ ಅಪ್ಪ ಇಂದಿನ ಡ್ಯಾಡಿ
ಅಂದಿನ ಸಾಧನೆ ಇಂದಿನ ಸಾಮಾನ್ಯ ಜ್ಞಾನ
ಅಂದಿನ ಸಂಸ್ಕೃತಿ ಸಂಸ್ಕಾರ ಇಂದು ಏನು ಏನು...?
***
೨೭. ಕಾಲೇಜಿನ ಮಸ್ತಿ
ಕಾಲೇಜಿನಲ್ಲಿ ಮಸ್ತಿ
ಅದುವೇ ತುಂಬಾ ಜಾಸ್ತಿ
ಆಮೇಲೆ ವಿದ್ಯಾರ್ಥಿಗಳ ನಡುವೆ ಕುಸ್ತಿಯೋ ಕುಸ್ತಿ
ಮುರಿಯಲೇ ಬೇಕಲ್ಲ ಮಸ್ತಿ ಮಾಡಿದವರ ಅಸ್ತಿ
***
೨೮. ಹೆಣ್ಣು
ಹೆಣ್ಣಿಗೆ ತನ್ನ ನಾಚಿಕೆಯೇ ಆಭರಣ
ಅವಳ ಮುಗ್ದತೆಯೇ ಅವಳಿಗೆ ದೊಡ್ಡ ಚಿನ್ನ
ಬಿಡಲಾರಳು ಇವಳು ತನ್ನ ದೇಶದ ಸಂಸ್ಕಾರ,ಸಂಸ್ಕೃತಿ
ಇವಳಿಗೆ ತನ್ನ ಅಂದ, ಚಂದ, ಸೌಂದರ್ಯವೇ ಲಕ್ಷಣ
***
೨೯. ಮೈಸೂರು
ಮಹಿಷಾಸುರ ಸಂಹಾರವಾದ ಊರಿದು
ಕಲೆಗಳಿಗೆ ಸಂಸ್ಕೃತಿಗೆ ತವರೂರ ಬೀಡಿದು
ರಾಜಾದಿ ರಾಜರು ಒಡೆಯರು ಆಳಿದ ಊರಿದು
ಕರ್ನಾಟಕದಲ್ಲಿ ಅರಮನೆ ನಗರಿ ಎಂದು ಪ್ರಸಿದ್ದವಾದ ಮೈಸೂರು ನಗರವಿದು
***
೩೦. ಗಾಂಧಿ
ಗಾಂಧಿ ಒಬ್ಬರು ಅಹಿಂಸಾವಾದಿ
ಮಾಡಿದರು ಬ್ರಿಟಿಷರನ್ನ ಬ್ರಾಂದಿ
ಇವರು ಬಂದ ಮೇಲೆ ಆಂಗ್ಲರು ಚಿಂದಿ ಚಿಂದಿ
ಕೊನೆಗೂ ಗೂಡಸೇಯಿಂದಾದರೂ ಬೂದಿ
***
೩೧. ಆಸೆ
ಯಾರಿಗೆ ಇರೋದಿಲ್ಲ ತಾನೇ ಆಸೆ
ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ
ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ
ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ
***
೩೨. ದೇವಸ್ಥಾನ
ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ
ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ
ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ
ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ
***
೩೩. ಬ್ರಿಲಿಯಂಟ್ಸ್ಗಳು
ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು
ಇವರ ಮುಂದೆ ನಾವು ಯಾವಾಗಲೂ ಕುಂಟರು
ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು
ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು.
***
೩೪. ರೈತ
ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ
ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ
ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ
ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ
***
೩೫. ಯಶಸ್ಸು
ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು
ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು
ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು
ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು
***
೩೬. ಗಿರವಿ ಅಂಗಡಿ ಗೀರ
ಗಿರವಿ ಅಂಗಡಿ ಗೀರ
ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ
ಒಂದ್ ಕಿಟ ಅವರೋದ್ರೇ ಬಾನೆತ್ತರ
ಅವರಿಂದ ನೀನಾಗುವೆ ಸಂಹಾರ
***
೩೭. ವಿದ್ಯೆ
ವಿದ್ಯಾದಾನವೇ ಮಹಾದಾನ ಅಂದಾಗಿತ್ತು
ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ
ಆದರೆ ಇದನ್ನು ಮಾತ್ರ ಮರೆಯಬೇಡಿ
ದುಡ್ಡೇ ದೊಡಪ್ಪ ವಿದ್ಯೆ ಅವರಪ್ಪ
***
೩೮. ಕೊಡಗಿನ ಹಸಿರು
ಪ್ರಕೃತಿಯ ಪ್ರಯೋಗಾಲಯ ಕೊಡಗು
ಮೂಡಿಸಿದೆ ಎಲ್ಲೆಲೂ ಹಸಿರಿನ ಬೆರಗು
ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು
ಹೋಗಲಾಡಿಸುವುದು ಮನದ ಕೊರಗು
***
೩೯. ಕುಂಕುಮ
ಹಣೆಯಲಿ ಯಾವಾಗಲೂ ನಗುತ್ತಿರಬೇಕು ಕುಂಕುಮ
ನೋಡಿದವರ ಮನಸ್ಸಿಗೆ ಸಿಗುವುದು ಸಂಭ್ರಮ
ಈಗ ಹಣೆಯಲ್ಲಿ ಕುಂಕುಮ ಇಡುವುದಕ್ಕೆ ಬರ
ಇಡದಿದ್ದವರಿಗೆ ಆ ದಿನ ತಪ್ಪಿದಲ್ಲ ಗ್ರಹಚಾರ
***
೪೦. ಸಂಸ್ಕೃತ ಭಾರತಿ
ದೇವ ಭಾಷೆಗೆ ತವರೂರಿದು ಸಂಸ್ಕೃತ ಭಾರತಿ
ಮಾಡುವೆನು ನಿನಗೆ ಜೇoಕಾರದ ಆರತಿ
ಅದೆಲ್ಲಿ ಹುಟ್ಟಿತು ಆ ನಿನ್ನ ಸಂತತಿ
ಮೈನವಿರೇಳುತ್ತದೆ ನೋಡಿ ಆ ನಿನ್ನ ಪ್ರಗತಿ
***
೪೧. Prime v/s Cheif
ಮೋದಿಯವರು ಮಾಡಿದರು ಮನ್ ಕೀ ಬಾತ್
ಅದು ಆಕಾಶವಾಣಿ ಕೆ ಸಾಥ್
ಸಿದ್ದುರವರು ತಿಂದರು ಖಾರ ಬಾತ್
ಆಮೇಲೆ ಹೇಳಿದರು ಕ್ಯಾ ಬಾತ್...ಕ್ಯಾ ಬಾತ್...
***
೪೨. ರಂಗಾಯಣ
ರಂಗು ರಂಗಿನ ರಂಗಾಯಣ
ಅಬ್ಬಾ ಏನು ಆ ನಾಟಕದ ದಿಬ್ಬಣ
ಮಾಡಿತು ನನ್ನ ನವರಸಗಳ ಸಮ್ಮಿಲನ
ನೀ ಮಿಡಿಸುವೆ ನನ್ನ ಒಳಮನ
***
೪೩. ಕವಿ ಆದಾಗ ನಾನು
Smile ಏಕೊ ತುಂಬಾ ಹೆಚ್ಚುವರಿ
Grind ಆಗಿದೆ ನನ್ನ ಮೆಮೊರಿ
Lines ಅಲ್ಲಿ ಏನೋ ಸರಾಸರಿ
Without reason ಸುಮ್ಮನೆ
***
೪೪. ಕೋಗಿಲೆ
ವಸಂತ ಕಾಲದಲ್ಲಿ ಮಾಮರದ ಮೇಲೆ ಕುಳಿತು ಆಡುವೆ
ನಮ್ಮ ನೋವುಗಳನ್ನು ಪಕ್ಕ ಇಟ್ಟು ನಿನ್ನ ಹಾಡು ಕೇಳುವೆ
ನಾದ ಸಾಮರಸ್ಯವನ್ನು ಮಣಿಗಳ ಹಾಗೆ ಜೋಡಿಸುವೆ
ನಮ್ಮ ಎದೆಯ ತಾಳವನ್ನು ನೀ ಮಿಡಿಸುವೆ... ಓ ಕೋಗಿಲೆ
***
೪೫. ಪ್ರೀತಿಯೋ ? ತ್ಯಾಗವೂ
ಪ್ರೀತಿ ಮಧುರ
ತ್ಯಾಗ ಅಮರ
ತ್ಯಾಗ ಮಡಿದ ಮೇಲೆ ಅನುಭವಿಸುವ ಕಷ್ಟ ತರ ತರ
ಕಷ್ಟ ಸಹಿಸಲಾರದವನು ಹರಹರ
***
೪೬. ಸೋ ಬ್ಯಾಡು...
ನಮ್ಮ ಹುಡುಗಿ ಮಾತಾಡಿಸದೆ ಇದ್ದರೆ ಆಗುತ್ತೆ ಸ್ಯಾಡು
ಈ ನೋವು ಅನ್ನೋದನ್ನ ಯಾರು ಮೇಡು
ಇದೆಲ್ಲ ಗೊತ್ತಿರುವುದು ಓನ್ಲಿ ಫಾರ್ ಗಾಡು
ಇಲ್ಲಿ ಹುಡುಗರ ಪರಿಸ್ಥಿತಿಯಂತು ಸೋ ಬ್ಯಾಡು...ಸೋ ಬ್ಯಾಡು
***
೪೭. ಮಡಿಕೇರಿ
ಮಂಜಿನ ಮಧ್ಯೆ ಕಾಣುವ ಊರು ಮಡಿಕೇರಿ
ನಾನ್ನೊಮ್ಮೆ ಮಾಡಿದೆ ಆ ಊರಿಗೆ ಸವಾರಿ
ನನ್ನ ಮನಸ್ಸು ಹೋಯ್ತು ಆ ಮಳೆಗೆ ಹಾರಿ
ಇವನ್ನೆಲ್ಲ ನೋಡೋಕೆ ನೀವು ಒಮ್ಮೆ ಹೋಗ್ರಿ
***
೪೮. ಕವಿ
ರವಿಯನ್ನು ಕೆಂಪಗೆ ಕಾಣುವನು ಕವಿ
ಕವಿಯ ಪದ ಕೇಳಿದರೆ ಇಂಪಾಗುವುದು ಕಿವಿ
ಸಾಹಿತ್ಯದ ರಸವನ್ನು ಸಹಿದವನ ಜೀವನ ಸಿಹಿ
ಸವಿಲಾರದವನ ಜೀವ ಯಾವಾಗಲೂ ಕಹಿ
***
೪೯. ಸೌಂದರ್ಯ
ಮನದ ಮನತಣಿಸಿ
ನವರಸವ ಹೊರಹಾಕುವುದು ಸೌಂದರ್ಯ
ಮನಸ್ಸು ಮುರಿದು
ರಸವ ಸುರಿಸಲೇ ನೀ ಅರ್ಹ
***
೫೦. ನಮನ
ಇದೋ ನನ್ನ ರಾಶಿ ಪದಗಳ ಸಮ್ಮಿಲನ
ನಿಮ್ಮ ಮುಂದೆ ಇಟ್ಟಿದ್ದೇನೆ ನನ್ನ ಒಂದು ಪುಟ್ಟ ಕವನ
ಎಲ್ಲರೂ ಪ್ರೀತಿಯಿಂದ ಹರಸಿ ಈ ಯುವ ಕವಿಯನ್ನ
ನನ್ನ ಪ್ರೀತಿಯ ಕನ್ನಡಿಗರಿಗೆಲ್ಲ ಕೋಟಿ ಕೋಟಿ ನಮನ
***
ಮುಂದಿನ ಬ್ಲಾಗ್ - ಮನಸಿನಾಳ
ನಾ ನಾಕುವೆ ಪದಗಳ ತಾಳ
ಪದಗಳು ತುಂಬಾ ಸರಳ
ಕೇಳಿದರೆ ನಿಮ್ಮ ಮನಸ್ಸು ನಿರಾಳ
ಇಲ್ಲಿ ಬರುವ ಪದಗಳೆಲ್ಲಾ ನನ್ನ ಮನಸಿನಾಳ
Comments
Post a Comment