Kannada - ಮೆಲುಕು

 ೧. ನಮಸ್ಕಾರ

ಚುಟುಕು ಬರೆಯುವುದಕ್ಕೆ ನೀಡಿದ್ದೀರಾ ಸಹಕಾರ

ನಾನಾಡಿದ್ದೇನೆ ಪದ ವಾಕ್ಯಗಳ ನಡುವೆ ಸಂಚಾರ

ಈ ಚುಟುಕುಗಳಲ್ಲಿದೆ ಒಂದುಚೂರು ವಿಚಾರ

ನನ್ನ ಪ್ರೀತಿಯ ಚುಟುಕು ಬಾಂದವರಿಗೆಲ್ಲ ನಮಸ್ಕಾರ


***


೨. ಹಠದ ಆಟ

ಜೀವನ ಒಂದು ಆಟ

ಅದನ್ನು ಗೆಲ್ಲಲೇಬೇಕೆಂಬ ಚಟ

ಗೆದ್ದವನು ಕಲಿಯುವನು ಪಾಠ

ಗೆಲ್ಲಲಾರದವನು ಪಡುವನು ಸಂಕಟ


***


೩. ಮಲೆನಾಡು

ಮಲೆಗಳ ನಾಡು

ಮನತಣಿಸುವ ಬೀಡು

ಎಲ್ಲೆಲ್ಲೂ ಸಹ್ಯಾದ್ರಿಯ ಗೂಡು

ತೊಲಗಿಸುವುದು ಮನಸ್ಸಿನ ಕೇಡು


***


೪. ಮಳೆ

ನಮ್ಮೊರಲ್ಲಿ ಬರುತ್ತೆ ಜಡಿಮಳೆ

ಮಳೆ ಒದ್ದೆ ಮಾಡಿತು ಈ ಇಳೆ

ತೊಲಗಿಸಿತು ರೈತನ ಗೋಳಿನ ಕೊಳೆ

ಆಮೇಲೆ ಬಂತು ಬಂಗಾರದ ಬೆಳೆ


***


೫. ವೈಶಿಷ್ಟ್ಯ

ಬೊಗಸೆಯಲ್ಲಿ ಹರಳಿದ ಪ್ರೀತಿ ಚಂದ

ಗಂಧವನ್ನ ಸವಿದರೆ ಪರಮಾನಂದ

ದುಂಭಿ ಹೂವಲ್ಲಿ ಹೀರುವುದು ಮಕರಂದ

ಆದರೆ ತಾವರೆ ಕೆಸರಿನಲ್ಲಿಯೇ ಹರಳುವುದು ಚಂದ


***


೬. ಆಕೆ

ಅವಳದು ಸಂಪಿಗೆಯಂತಹ ಸ್ಮೈಲು

ಅದಕ್ಕೆ ನಾನಾದೆ ಐಲು ಪೈಲು

ಅಂದದಲ್ಲಿ ರಂಭೆಗಿಂತಲೂ ಮೇಲು

ಇವಳ ಮುಂದೆ ನಾ ಒಪ್ಪಿ ಕೊಳ್ಳಲೇಬೇಕಿತ್ತು ಸೋಲು


***


೭. ಮದುವೆ

ಸಪ್ತಾರ್ಷಿಗಳ ಆಶೀರ್ವಾದದಿಂದ

ಅಗ್ನಿಸಾಕ್ಷಿಯ ಮುಂದೆ ಸಪ್ತಪದಿ ತುಳಿದು

ಬ್ರಹ್ಮಗಂಟನು ಬಿಗಿದು ಅರುಂಧತಿ ನಕ್ಷತ್ರವನ್ನು

ನೋಡಿ ಹಿರಿಯರ ಆಶೀರ್ವಾದಿಂದಾಗುವುದೇ ಮದುವೆ


***


೮. ಸಾಹಿತ್ಯ

ಬರೆದೆ ನಾನು ಚುಟುಕು  ಸಾಹಿತ್ಯ

ನೀಡಿತು ನನ್ನ ಬದುಕಿಗೆ ಲಾಲಿತ್ಯ

ಗೀಚಿದೆ ಅದನ್ನು ನಾನು ನಿತ್ಯ ನಿತ್ಯ

ಇದೆ ತಾನೆ ನನ್ನ ಬದುಕಿಗೆ ಅಗತ್ಯ


***


೯. ಬೆಳೆ

ಕಾಲ ಕಾಲಕ್ಕೆ ಆಗಬೇಕು ಬೆಳೆ

ಸಮಯಕ್ಕೆ ಸರಿಯಾಗಿ ಬೇಡವೇ ಮಳೆ?

ಬೆಳೆ ಬಾರದಿದ್ದರೆ ರೈತನ ಜೀವನ ಗೋಳೆ

ಬೆಳೆ ಬಂದರೆ ಚಿಮ್ಮುವುದು ಹರುಷದ ಹೊಳೆ


***


೧೦. ವೇಗ

ಕಡಿಮೆ ವೇಗ ವಾಹನ

ನಮ್ಮ ಜೀವನ ಪಾವನ

ಭಾರಿ ವೇಗ ವಾಹನ

ನಮ್ಮ ಫೋಟೋ ಪ್ರದರ್ಶನ


***


೧೧. ಮರ

ದೇಶಕ್ಕೆ ಶೋಭೆಯೇ ಈ ಹಸಿರು ಮರ

ಆದರೆ ನಮ್ಮ ಜನರಿಗೆ ಮರ ಬೆಳೆಸುವ ಬರ

ಬೇಡವೇ ಮರ ಬೆಳೆಸುವುದಕ್ಕೆ ಜನರ ಸಹಕಾರ

ಸಹಕಾರ ಇಲ್ಲದಿದ್ದರೆ ನೀನಾಗುವೆ ಸಂಹಾರ


***


೧೨. ಪರಿಸರ

ಪರಿಸರ ಇರುವುದು ಸುತ್ತಾ ಮುತ್ತಾ

ಕೊಡುವುದು ಗಾಳಿ ಅತ್ತಾ ಇತ್ತಾ

ಮಾಲಿನ್ಯ ಪರಿಸರದಲ್ಲಿ ಹೆಚ್ಚುತ್ತಾ ಹೆಚ್ಚುತ್ತಾ

ಆದರೆ ಮನುಷ್ಯನ ಸ್ವಾರ್ಥ ಪರಿಸರದ ಕಡೆಗೆ ನಿಲ್ಲುತ್ತಾ...?


***


೧೩. ನೋವು

ಜೀವನದಲ್ಲಿದೆ ತುಂಬಾ ನೋವು

ನೋವು ಹೋದರೆ ಬರುವುದು ನಲಿವು

ನಲಿವಿನಿಂದಲೇ ಜೀವನದ ಉಲಿವು

ಜೀವನದ ತತ್ವಗಳನ್ನು ಅರಿತುಕೊಳ್ಳಬೇಕು ಹಲವು


***


೧೪. ನಿಘಂಟು

ಎರಡು ಮನಸ್ಸು ಕೂಡಿದರೆ ಪ್ರೀತಿ

ಇಬ್ಬರ ಜಾತಕ ಒಂದಿಕೆಯಾದರೆ ತಾನೆ ಮದುವೆ?

ಹಿಂದು,ಮುಸ್ಲಿಂ,ಕ್ರೈಸ್ತ ಆಗೋದಿಲ್ಲ ಒಂದೇ

ಈಡೀ ಜಗತ್ತು ಒಂದಾಗಿದ್ದಾರೆ ಹೇಗಿರುತ್ತೆ, ಯೋಚಿಸು ಒಮ್ಮೆ...


***


೧೫. ಪ್ರಕೃತಿ

ಪ್ರಕೃತಿ ನೋಡಲು ಅದುವೇ ಅಂದ

ಅದರ ಸೊಬಗಿನಿಂದ ಸಿಗುವುದು ಪರಮಾನಂದ

ನೀ ಯಾಕೆ ಕೆಡಿಸುತ್ತೀಯಾ ಅದರ ಚೆಂದ?

ಕೆಡಿಸುವುದನ್ನು ಬಿಟ್ಟು ಸವಿ ಅದರ ಗಂಧ


***


೧೬. ಸಮಯ

ಕಾಯೋದಿಲ್ಲ ನೋಡೋದಿಲ್ಲ ಓಡುತ್ತದೆ ಸಮಯ

ಕಾಯದಿದ್ದರೆ ಮಾಡುವುದು ನಮ್ಮ ಜೀವನ ವ್ಯಯ

ಇದನ್ನು ಆದಿತುಕೊಂಡವನ ಜೀವನ ಆಗುವುದು ಸುಖಮಯ

ಅರಿತುಕೊಳ್ಳದವನ ಜೀವನ ಆಗುವುದು ನಿರ್ಣಯ


***


೧೭. ಬಾಲ್ಯ ವಿವಾಹ

ಏನೂ ಅರಿಯದ ಹುಡುಗಿಗೆ ಅರಿಶಿಣದ ಗಂಟು

ಇವಳಿಗೆ ಗೊತ್ತಾಗುವುದೇ ಸಂಸಾರದ ನಿಘಂಟು 

ಆದರೂ ಸಂಸಾರ ಮಾಡುವಳೂ ಎಂಬ ಉಟ್ಟಿಕೊಳ್ಳುವ statementu

ಆಮೇಲೆ ಸಂಸಾರದಲ್ಲಿ ಆಗುವುದ developmentu


***


೧೮. ರೇಖಾಗಣಿತದ ಡೇಟಾ

ರೇಖಾಗಣಿತದಲ್ಲಿ ಮುಖ್ಯವಾಗಿ ಬರೆಯಬೇಕು ಡೇಟಾ

ಈಗಿನ ಮಕ್ಕಳಿಗೆ ಅದನ್ನು ಬರೆಯುವುದೇ ದೊಡ್ಡ ಕಾಟ

ಡೇಟಾ ಬರೆಯದಿದ್ದರೂ ಅಂಕ ಬೇಕೆಂಬ ಹಠ

ಆದರೆ ನಿಲ್ಲುತ್ತಾ ಡೇಟಾ ಬರೆಯದ ಚಟಾ...?


***


೧೯. ಜ್ಞಾನ

ದೇಶದಲ್ಲಿ ತುಂಬಿತುಳುಕಬೇಕು ಜ್ಞಾನ

ಜ್ಞಾನದಿಂದಲೇ ಬೆಳಗುವುದು ವಿಜ್ಞಾನ

ವಿಜ್ಞಾನದಿಂದಲೇ ಹರಡುತ್ತಿದೆ ಸುಜ್ಞಾನ

ನಿಲ್ಲುವುದ ಈ ನೀಚ ಅನಿಸ್ಟ ಅಜ್ಞಾನ?


***


೨೦. ಸೊಸೆ

ಮನೆಯಲ್ಲಿದ್ದರೆ ಸೊಸೆ

ಆ ಗೃಹ ಯಾವಾಗಲೂ ಶೋಭಸೆ

ಪತಿ ಆಗ ತಿರುಗಿಸುವನು ಮೀಸೆ

ಸಂತೋಷದಿಂದಿರುವುದೇ ಅತ್ತೆ ಮಾವನ ಆಸೆ


***


೨೧. ನನಗಿದು ಕನ್ಫ್ಯೂಷನ್

ಮಾರ್ಕ್ಸ್ ಇಲ್ಲದಿದ್ದರೆ ಕೊಡಲೇಬೇಕು ಡೊನೇಷನ್

ವಯಸ್ಕರಿಗೆ ಬೇಕೇ ಬೇಕಲ್ಲ ಕಾನ್ಸೆಷನ್

ರಾಜಕಾರಣಿಗಳಲ್ಲಿ ಏಕೆ ಆಗುತ್ತಿದೆ ಮ್ಯುಟೇಷನ್

ನನಗಿದು ತುಂಬಾ ಕನ್ಫ್ಯೂಷನ್ ಕನ್ಫ್ಯೂಷನ್


***


೨೨. ಹೆಂಡತಿ

ಜೀವನದ ನಡೆನುಡಿಗಳನ್ನು ಅರ್ಥಮಾಡಿಕೊಳ್ಳುತ್ತ

ಗಂಡನ ಕಷ್ಟ ನೋವುಗಳನ್ನು ಹಣ್ಣಿನಂತೆ ಸವಿಯುತ್ತ

ಬಾಳಿನ ದೀಪವನ್ನು ಕತ್ತಲಿನಿಂದ ಬೆಳಕಿಗೆ ಸ್ಪರ್ಶಿಸುತ್ತಾ

ಗಂಡನ ಜೀವನದ ಸಂಗಾತಿಯಾಗಿರುವಳೆ ಹೆಂಡತಿ


***


೨೩. ನಾನು ಭಾರತೀಯ

ನಾನು ಭಾರತೀಯ ಅನ್ನೋದಕ್ಕೆ ಆಧಾರ್ ಕಾರ್ಡು

ಬಡವ ಶ್ರೀಮಂತ ಅನ್ನೋದಕ್ಕೆ ಬಿಪಿಎಲ್, ಎಪಿಎಲ್ ಕಾರ್ಡು

ಉದ್ಯಮಿ ಅನ್ನೋದಕ್ಕೆ ಜಾಬ್ ಕಾರ್ಡು

ನಾ ಮನುಷ್ಯ ಅನ್ನೋದಕ್ಕೆ ಯಾವ ಕಾರ್ಡು ?


***


೨೪. ಪ್ರೀತಿ 

ಪ್ರೀತಿಲಿ ಬಿದ್ದವನು ಹೇಳ್ಕೊತಾನೆ ಜಾಕಿ

ಪ್ರೀತಿ ಸಿಗಲಿಲ್ಲ ಅಂದರೆ ಅವನು ತಿರುಬೋಕಿ

ನೀನು ಬೇಡ ಅಂತ ಬರೆದು ಕೊಟ್ಟಳು ಸೈನ್ ಹಾಕಿ

ಇನ್ನೇನು ಉಳಿದಿದೆ ಅವನ ಜೀವನದಲ್ಲಿ ಬಾಕಿ?


***


೨೫. ಪ್ರೀತಿ ಒಂತರ ಗಿನತಿ

ಒಂದು ಎರಡು ಹುಡುಗಿ ಇಂದೇ ಹೊರಡು ಮೂರು ನಾಲ್ಕು

ಕಾಲು ಹಾಕು; ಐದು ಆರು ಪ್ರಿಯತಮನ ಹಾರ್ಟು ಶೇರು

ಏಳು ಎಂಟು ಯಾವಾಗ ನೋಡಿದರು ಮೀಟು

ಒಂಬತ್ತು ಹತ್ತು ನಿನ್ಮೇಲೇ ಪ್ಯಾರ್ ಆಯ್ತು


***


೨೬. ಅಂದು-ಇಂದು

ಅಂದಿನ ಅಮ್ಮ ಇಂದಿನ ಮಮ್ಮಿ

ಅಂದಿನ ಅಪ್ಪ ಇಂದಿನ ಡ್ಯಾಡಿ

ಅಂದಿನ ಸಾಧನೆ ಇಂದಿನ ಸಾಮಾನ್ಯ ಜ್ಞಾನ

ಅಂದಿನ ಸಂಸ್ಕೃತಿ ಸಂಸ್ಕಾರ ಇಂದು ಏನು ಏನು...?


***


೨೭. ಕಾಲೇಜಿನ ಮಸ್ತಿ

ಕಾಲೇಜಿನಲ್ಲಿ ಮಸ್ತಿ 

ಅದುವೇ ತುಂಬಾ ಜಾಸ್ತಿ 

ಆಮೇಲೆ ವಿದ್ಯಾರ್ಥಿಗಳ ನಡುವೆ ಕುಸ್ತಿಯೋ ಕುಸ್ತಿ 

ಮುರಿಯಲೇ ಬೇಕಲ್ಲ ಮಸ್ತಿ ಮಾಡಿದವರ ಅಸ್ತಿ


***


೨೮. ಹೆಣ್ಣು

ಹೆಣ್ಣಿಗೆ ತನ್ನ ನಾಚಿಕೆಯೇ ಆಭರಣ

ಅವಳ ಮುಗ್ದತೆಯೇ ಅವಳಿಗೆ ದೊಡ್ಡ ಚಿನ್ನ

ಬಿಡಲಾರಳು ಇವಳು ತನ್ನ ದೇಶದ ಸಂಸ್ಕಾರ,ಸಂಸ್ಕೃತಿ

ಇವಳಿಗೆ ತನ್ನ ಅಂದ, ಚಂದ, ಸೌಂದರ್ಯವೇ ಲಕ್ಷಣ


***


೨೯. ಮೈಸೂರು

ಮಹಿಷಾಸುರ ಸಂಹಾರವಾದ ಊರಿದು

ಕಲೆಗಳಿಗೆ ಸಂಸ್ಕೃತಿಗೆ ತವರೂರ ಬೀಡಿದು

ರಾಜಾದಿ ರಾಜರು ಒಡೆಯರು ಆಳಿದ ಊರಿದು

ಕರ್ನಾಟಕದಲ್ಲಿ ಅರಮನೆ ನಗರಿ ಎಂದು ಪ್ರಸಿದ್ದವಾದ ಮೈಸೂರು ನಗರವಿದು


***


೩೦. ಗಾಂಧಿ

ಗಾಂಧಿ ಒಬ್ಬರು ಅಹಿಂಸಾವಾದಿ

ಮಾಡಿದರು ಬ್ರಿಟಿಷರನ್ನ ಬ್ರಾಂದಿ

ಇವರು ಬಂದ ಮೇಲೆ ಆಂಗ್ಲರು ಚಿಂದಿ ಚಿಂದಿ

ಕೊನೆಗೂ ಗೂಡಸೇಯಿಂದಾದರೂ ಬೂದಿ


***


೩೧. ಆಸೆ

ಯಾರಿಗೆ ಇರೋದಿಲ್ಲ ತಾನೇ ಆಸೆ

ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ

ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ

ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ


***


೩೨. ದೇವಸ್ಥಾನ

ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ

ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ

ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ

ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ


***


೩೩. ಬ್ರಿಲಿಯಂಟ್ಸ್ಗಳು

ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು

ಇವರ ಮುಂದೆ ನಾವು ಯಾವಾಗಲೂ ಕುಂಟರು

ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು

ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು.


***


೩೪. ರೈತ

ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ

ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ

ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ

ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ


***


೩೫. ಯಶಸ್ಸು

ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು

ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು

ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು

ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು


***


೩೬. ಗಿರವಿ ಅಂಗಡಿ ಗೀರ

ಗಿರವಿ ಅಂಗಡಿ ಗೀರ

ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ

ಒಂದ್ ಕಿಟ ಅವರೋದ್ರೇ ಬಾನೆತ್ತರ

ಅವರಿಂದ ನೀನಾಗುವೆ ಸಂಹಾರ


***


೩೭. ವಿದ್ಯೆ

ವಿದ್ಯಾದಾನವೇ ಮಹಾದಾನ ಅಂದಾಗಿತ್ತು

ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ

ಆದರೆ ಇದನ್ನು ಮಾತ್ರ ಮರೆಯಬೇಡಿ

ದುಡ್ಡೇ ದೊಡಪ್ಪ ವಿದ್ಯೆ ಅವರಪ್ಪ


***


೩೮. ಕೊಡಗಿನ ಹಸಿರು

ಪ್ರಕೃತಿಯ ಪ್ರಯೋಗಾಲಯ ಕೊಡಗು

ಮೂಡಿಸಿದೆ ಎಲ್ಲೆಲೂ ಹಸಿರಿನ ಬೆರಗು

ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು

ಹೋಗಲಾಡಿಸುವುದು ಮನದ ಕೊರಗು


***


೩೯. ಕುಂಕುಮ

ಹಣೆಯಲಿ ಯಾವಾಗಲೂ ನಗುತ್ತಿರಬೇಕು ಕುಂಕುಮ

ನೋಡಿದವರ ಮನಸ್ಸಿಗೆ ಸಿಗುವುದು ಸಂಭ್ರಮ

ಈಗ ಹಣೆಯಲ್ಲಿ ಕುಂಕುಮ ಇಡುವುದಕ್ಕೆ ಬರ

ಇಡದಿದ್ದವರಿಗೆ ಆ ದಿನ ತಪ್ಪಿದಲ್ಲ ಗ್ರಹಚಾರ


***


೪೦. ಸಂಸ್ಕೃತ ಭಾರತಿ 

ದೇವ ಭಾಷೆಗೆ ತವರೂರಿದು ಸಂಸ್ಕೃತ ಭಾರತಿ

ಮಾಡುವೆನು ನಿನಗೆ ಜೇoಕಾರದ ಆರತಿ

ಅದೆಲ್ಲಿ ಹುಟ್ಟಿತು ಆ ನಿನ್ನ ಸಂತತಿ

ಮೈನವಿರೇಳುತ್ತದೆ ನೋಡಿ ಆ ನಿನ್ನ ಪ್ರಗತಿ


***


೪೧. Prime  v/s Cheif 

ಮೋದಿಯವರು ಮಾಡಿದರು ಮನ್ ಕೀ ಬಾತ್

ಅದು ಆಕಾಶವಾಣಿ ಕೆ ಸಾಥ್

ಸಿದ್ದುರವರು ತಿಂದರು ಖಾರ ಬಾತ್

ಆಮೇಲೆ ಹೇಳಿದರು ಕ್ಯಾ ಬಾತ್...ಕ್ಯಾ ಬಾತ್...


***


೪೨. ರಂಗಾಯಣ

ರಂಗು ರಂಗಿನ ರಂಗಾಯಣ

ಅಬ್ಬಾ ಏನು ಆ ನಾಟಕದ ದಿಬ್ಬಣ

ಮಾಡಿತು ನನ್ನ ನವರಸಗಳ ಸಮ್ಮಿಲನ

ನೀ ಮಿಡಿಸುವೆ ನನ್ನ ಒಳಮನ


***


೪೩. ಕವಿ ಆದಾಗ ನಾನು

Smile ಏಕೊ ತುಂಬಾ ಹೆಚ್ಚುವರಿ

Grind ಆಗಿದೆ ನನ್ನ ಮೆಮೊರಿ

Lines ಅಲ್ಲಿ ಏನೋ ಸರಾಸರಿ

Without reason ಸುಮ್ಮನೆ


***


೪೪. ಕೋಗಿಲೆ

ವಸಂತ ಕಾಲದಲ್ಲಿ ಮಾಮರದ ಮೇಲೆ ಕುಳಿತು ಆಡುವೆ

ನಮ್ಮ ನೋವುಗಳನ್ನು ಪಕ್ಕ ಇಟ್ಟು ನಿನ್ನ ಹಾಡು ಕೇಳುವೆ

ನಾದ ಸಾಮರಸ್ಯವನ್ನು ಮಣಿಗಳ ಹಾಗೆ ಜೋಡಿಸುವೆ

ನಮ್ಮ ಎದೆಯ ತಾಳವನ್ನು ನೀ ಮಿಡಿಸುವೆ... ಓ ಕೋಗಿಲೆ


***


೪೫. ಪ್ರೀತಿಯೋ ? ತ್ಯಾಗವೂ

ಪ್ರೀತಿ ಮಧುರ

ತ್ಯಾಗ ಅಮರ

ತ್ಯಾಗ ಮಡಿದ ಮೇಲೆ ಅನುಭವಿಸುವ ಕಷ್ಟ ತರ ತರ

ಕಷ್ಟ ಸಹಿಸಲಾರದವನು ಹರಹರ


***


೪೬. ಸೋ ಬ್ಯಾಡು...

ನಮ್ಮ ಹುಡುಗಿ ಮಾತಾಡಿಸದೆ ಇದ್ದರೆ ಆಗುತ್ತೆ ಸ್ಯಾಡು

ಈ ನೋವು ಅನ್ನೋದನ್ನ ಯಾರು ಮೇಡು

ಇದೆಲ್ಲ ಗೊತ್ತಿರುವುದು ಓನ್ಲಿ ಫಾರ್ ಗಾಡು

ಇಲ್ಲಿ ಹುಡುಗರ ಪರಿಸ್ಥಿತಿಯಂತು ಸೋ ಬ್ಯಾಡು...ಸೋ ಬ್ಯಾಡು


***


೪೭. ಮಡಿಕೇರಿ

ಮಂಜಿನ ಮಧ್ಯೆ ಕಾಣುವ ಊರು ಮಡಿಕೇರಿ

ನಾನ್ನೊಮ್ಮೆ ಮಾಡಿದೆ ಆ ಊರಿಗೆ ಸವಾರಿ

ನನ್ನ ಮನಸ್ಸು ಹೋಯ್ತು ಆ ಮಳೆಗೆ ಹಾರಿ

ಇವನ್ನೆಲ್ಲ ನೋಡೋಕೆ ನೀವು ಒಮ್ಮೆ ಹೋಗ್ರಿ


***


೪೮. ಕವಿ

ರವಿಯನ್ನು ಕೆಂಪಗೆ ಕಾಣುವನು ಕವಿ

ಕವಿಯ ಪದ ಕೇಳಿದರೆ ಇಂಪಾಗುವುದು ಕಿವಿ

ಸಾಹಿತ್ಯದ ರಸವನ್ನು ಸಹಿದವನ ಜೀವನ ಸಿಹಿ

ಸವಿಲಾರದವನ ಜೀವ ಯಾವಾಗಲೂ ಕಹಿ


***


೪೯. ಸೌಂದರ್ಯ

ಮನದ ಮನತಣಿಸಿ

ನವರಸವ ಹೊರಹಾಕುವುದು ಸೌಂದರ್ಯ

ಮನಸ್ಸು ಮುರಿದು

ರಸವ ಸುರಿಸಲೇ ನೀ ಅರ್ಹ 


***


೫೦. ನಮನ

ಇದೋ ನನ್ನ ರಾಶಿ ಪದಗಳ ಸಮ್ಮಿಲನ

ನಿಮ್ಮ ಮುಂದೆ ಇಟ್ಟಿದ್ದೇನೆ ನನ್ನ ಒಂದು ಪುಟ್ಟ ಕವನ

ಎಲ್ಲರೂ ಪ್ರೀತಿಯಿಂದ ಹರಸಿ ಈ ಯುವ ಕವಿಯನ್ನ 

ನನ್ನ ಪ್ರೀತಿಯ ಕನ್ನಡಿಗರಿಗೆಲ್ಲ ಕೋಟಿ ಕೋಟಿ ನಮನ


***


ಮುಂದಿನ ಬ್ಲಾಗ್ - ಮನಸಿನಾಳ

ನಾ ನಾಕುವೆ ಪದಗಳ ತಾಳ

ಪದಗಳು ತುಂಬಾ ಸರಳ

ಕೇಳಿದರೆ ನಿಮ್ಮ ಮನಸ್ಸು ನಿರಾಳ

ಇಲ್ಲಿ ಬರುವ ಪದಗಳೆಲ್ಲಾ ನನ್ನ ಮನಸಿನಾಳ

Comments

Popular posts from this blog

Ageing is not an end

My Mother

To My Friend